ಆಸೆ ಎನಗಿಲ್ಲ ಸುರಬಾಲೆಯರ
ಆಭರಣದಿ ಪೋಣಿಸಿಕೊಳ್ಳಲು||
ಆಸೆ ಎನಗಿಲ್ಲ ಪ್ರೇಮಹಾರದಲಿದ್ದು
ಪ್ರೇಮಿಗಳನು ಸೆಳೆಯಲು.||
ಆಸೆ ಎನಗಿಲ್ಲ ಹೇ ಹರಿ!
ಸಾಮ್ರಾಟರ ಶವವನ್ನೇರಲು||
ಆಸೆ ಎನಗಿಲ್ಲ ದೇವ ದೇವಿಯರ
ಮುಡಿಗೇರುವ ಭಾಗ್ಯಕೆ ಗರ್ವಪಡಲು||
ಕಿತ್ತುಬಿಡು ಗಿಡದಿಂದ ಹೇ ವನಮಾಲಿ !
ಏಸೆದುಬಿಡು ಆ ದಾರಿಯಲಿ ನನ್ನನ್ನು |
ಎಲ್ಲಿ ನಡೆದು ಹೋಗುವರೋ ಅನೇಕ ವೀರರು
ತಾಯ್ನಾಡಿಗಾಗಿ ಅರ್ಪಿಸಲು ತಮ್ಮ ಶಿರವನ್ನು||
(ಹಿಂದಿ ಮೂಲ: ಮಖ್ಖನ್ ಲಾಲ್ ಚತುರ್ವೇದಿ
ಅನುವಾದ: ಹರಿಪ್ರಸಾದ್)
https://kaavyaalaya.org/pushp_kee_abhilaashaa
No comments:
Post a Comment