Saturday, August 5, 2023

ನೀಲಕಂಠ

 

(Painting by:Mayura Simha https://www.instagram.com/mayurasimha/)

ಸುರಾಸುರರೆಲ್ಲ ಸೇರಿ ಅಮೃತ ಮಂಥನವ ಮಾಡಿರೆ
ನೊರೆಯಾಗಿ ಸರ್ಪದ ಬಾಯಿಂದ ಹರಿಯಿತು ವಿಷವು
ಪರಿತಪಿಸುತಿರೇ ಮೂರ್ಲೋಕ ಆ ನಂಜಿನಾ ಬೇಗೆಗೆ
ಹರನು ತ್ವರಿತದಿಬಂದು ನುಂಗಿದನು ಹಾಲಹಲವ

ಅಂಜಿದಳು ಉಮೆಯು ಇದನು ಕಂಡು
ನಂಜು ಗಂಡನಿಗೇ ಕೇಡ ಮಾಡುವುದೆಂದು
ಮಂಜುನಾಥನ ಗಂಟಲಲೇ ತಡೆಯಲು ವಿಷವನು
ನಂಜುಕಂಠನಾಗಿ ಕಂಡನು ಆ ಹರನು

ಭಿತ್ತಿಯೊಳು ಕಂಡ ಓ ನೀಲಕಂಠನೇ !
ಚಿತ್ತದೊಳಿರುವ ನಂಜ ಕುಡಿದು ಮನ
ಎತ್ತಲೋ ಪೋಗದಂತೆ ಮಾಡಿ ಎನ್ನ
ಸುತ್ತಿರುವ ಮಾಯೆಕಳಚಯ್ಯನೆಂದ ಹರಿಹಂಸ

No comments:

Post a Comment