(Painting by:Mayura Simha https://www.instagram.com/mayurasimha/)
ಸುರಾಸುರರೆಲ್ಲ ಸೇರಿ ಅಮೃತ ಮಂಥನವ ಮಾಡಿರೆ
ನೊರೆಯಾಗಿ ಸರ್ಪದ ಬಾಯಿಂದ ಹರಿಯಿತು ವಿಷವು
ಪರಿತಪಿಸುತಿರೇ ಮೂರ್ಲೋಕ ಆ ನಂಜಿನಾ ಬೇಗೆಗೆ
ಹರನು ತ್ವರಿತದಿಬಂದು ನುಂಗಿದನು ಹಾಲಹಲವ
ಅಂಜಿದಳು ಉಮೆಯು ಇದನು ಕಂಡು
ನಂಜು ಗಂಡನಿಗೇ ಕೇಡ ಮಾಡುವುದೆಂದು
ಮಂಜುನಾಥನ ಗಂಟಲಲೇ ತಡೆಯಲು ವಿಷವನು
ನಂಜುಕಂಠನಾಗಿ ಕಂಡನು ಆ ಹರನು
ಭಿತ್ತಿಯೊಳು ಕಂಡ ಓ ನೀಲಕಂಠನೇ !
ಚಿತ್ತದೊಳಿರುವ ನಂಜ ಕುಡಿದು ಮನ
ಎತ್ತಲೋ ಪೋಗದಂತೆ ಮಾಡಿ ಎನ್ನ
ಸುತ್ತಿರುವ ಮಾಯೆಕಳಚಯ್ಯನೆಂದ ಹರಿಹಂಸ
No comments:
Post a Comment