Wednesday, August 31, 2022

Ganesha In limelight


(Drawing courtesey: Shri Umesh B.V)

ಈ ಚಿತ್ರಕ್ಕೆ ನನ್ನ ಕಲ್ಪನೆ:

ಗಣೇಶ:

|ಅಮ್ಮ! ನಿನ್ನ ಸೇರಲೆಂದು ಬಂದೆ ನನ್ನ ವಾಹನವನ್ನೆರಿ|

|ಹಿಂಸಿಸುತ್ತಿರುವರು ನನ್ನಟಿ.ವಿ. ಚಾನ್ನೆಲ್ಗಳೆಲ್ಲಾ ಸೇರಿ|

|ದಿಕ್ಕೇ ತೋಚದಂತಾಗಿದೆ ನನ್ನ ವಾಹನವ ನಿಂತಿರಲು ಬೆದರಿ|

|ನೀನೇ ನನಗೆ ದಾರಿ ತೋರು ಎನ್ನಮ್ಮ ಗೌರಿ|


ಗೌರಿ:

|ನಿನಗೆ ದಾರಿ ನಾ ತೋರಬೇಕೇ ಓ‌ ನನ್ನ ಮುದ್ದು |

|ಮೌನವಾಗಿ ಬಂದುಬಿಡು ಅಲ್ಲಿಂದ ಎದ್ದು|

|ಭಕ್ತರೆಲ್ಲ ಕಾಯುತ್ತಿರುವರು ಪೂಜೆಗಾಗಿ ನಿನ್ನ|

|ವರಸಿದ್ಧಿ ವಿನಾಯಕನಾಗಿ ಹರಸು ಎಲ್ಲರನ್ನ|


ಎಲ್ಲರಿಗೂ ಆ ವರಸಿದ್ಧಿ ವಿನಾಯಕನು ಶುಭವನ್ನುಂಟು ಮಾಡಲಿ

Tuesday, August 30, 2022

ಲಕ್ಷ್ಮಿಕೇಶವ ಭಜನೆ



(ಸುಂದರಾನನ ಸುಂದರಾನನ ಧಾಟಿಯಲ್ಲಿ)

ಲಕ್ಷ್ಮಿಕೇಶವ ಲಕ್ಷ್ಮಿಕೇಶವ
ಹರಿ ಹರಿ ಹರಿ ಹರಿ ಲಕ್ಷ್ಮಿಕೇಶವ

ಶಂಖ ಚಕ್ರವು ಗದಾಪದ್ಮವೂ
ನಾಲ್ಕು ಕೈಲಿ ಹಿಡಿದಾ ಲಕ್ಷ್ಮಿಕೇಶವ

ಶ್ರೀಲಕ್ಷ್ಮಿಯು ಪದ್ಮದಲ್ಲಿಹ
ಶ್ರೀಲಕ್ಷ್ಮೀಪತಿ ಲಕ್ಷ್ಮಿಕೇಶವ

ಚೆನ್ನಕೇಶವ ಸೌಮ್ಯಕೇಶವ
ಗೋಮುಖದ ಒಡಲಿನ ಶ್ರೀ ಲಕ್ಷ್ಮೀಕೇಶವ

ಕೌಶಿಕಮುನಿಯು ತಪವ ಮಾಡಿದ
ಪುಣ್ಯಕ್ಷೇತ್ರ ಕೌಶಿಕದ ಲಕ್ಷ್ಮಿಕೇಶವ

ಪಂಚಲಿಂಗ ಕ್ಷೇತ್ರದಿ ಮಧ್ಯೆ ನೆಲೆಸಿಹ
ಹರಿಹರ ಸ್ವರೂಪ ಲಕ್ಷ್ಮಿಕೇಶವ

ಚೈತ್ರ ಮಾಸದ ಹುಣ್ಣಿಮೆ ನಿನ್ನ
ಬ್ರಹ್ಮರಥೋತ್ಸವ ಲಕ್ಷ್ಮಿಕೇಶವ

ಹರಿಹಂಸನ ಕುಲದೈವವೇ
ಅನುಗ್ರಹಿಸೊ ನೀ ಎಮ್ಮ ಲಕ್ಷ್ಮಿಕೇಶವ 

Friday, August 26, 2022

ನಮಿಪೆ ಲಂಬೂ ದೊಡ್ಡಪ್ಪ

Shri Lambodara A


ನಮ್ಮ ನೆಚ್ಚಿನ ದೊಡಪ್ಪ ಲಂಬೋದರ,
ಏ.ಪಿ ರಾವ್ ಅಚ್ಚಮ್ಮ ದ್ವಿತೀಯ ಕುವರ
ಲಲಿತೆಗೆ ಅನುರೂಪ ವರ
ವಿವಾಹವಾಯಿತು  ಸರಳ ಸುಂದರ

ನಾಮಧೇಯದಲಿ ಶಂಭು-ಗೌರಿಸುತ
ಮೀನಾಕ್ಷಿ-ಶಂಭು ಗೌರಿಯರಿಗೆ ಪಿತ
ಬಯಸುತ್ತಿದ್ದಿರಿ ಸದಾ ಪರಹಿತ 
ಎಲ್ಲರೂ ಒಂದೇ ಎಂಬುದೇ ನಿಮ್ಮ ಮತ 

ಪದವಿ ಪಡೆದ ವಿಷಯ ಗಣಿತ
ಗಣಕ ತಂತ್ರಾಂಶದಲ್ಲಿ ಬಹಳ ಆಸಕ್ತ 
ತಾಂತ್ರಿಕ ಪದವಿಯಿಲ್ಲದ ಅನಭಿಷಕ್ತ ಅಭಿಯಂತ 
ಕಸದಿಂದ ರಸತೆಗೆವ  ಕಲೆಯು ಕರಗತ 

ನೀವೊಂದು  ಜ್ಞಾನದ ಭಂಡಾರ
ಹರಿಸುತ್ತಿದ್ದಿರಿ ಹಾಸ್ಯದ ಮಹಾಪೂರ
ನಮ್ಮ ಬುದ್ಧಿ ಮತಿಗೆ  ಚೇತೋಪಹಾರ 
ಮುಖದ ಮೇಲಿನ ಮುಗುಳ್ನಗೆಯೇ ಮನೋಹರ 

ಅಡಿಗಡಿಗೂ ನುಡಿನುಡಿಗೂ
ಪದಗಳೊಂದಿಗಾಡುತ್ತಿದ್ದ ನಿಮಗಾರು ಸಮ?
Funಗಳ   ಮಾಡುತ್ತ Punಗಳ ಸುರಿಸುತ್ತಿದ್ದ  
ನೀವು ನಿಜವಾದ Punಡಿತೋತ್ತಮ 

ನಿಮ್ಮ ಕಾರ್ಯ ವೈಖರಿಯ ಗಮ್ಮತ್ತು
ಅದನ್ನು ನೋಡಿದವರಿಗೆೇ ಗೊತ್ತು
ನೀವು ಬಿಲ್ ಪಾವತಿಸುವ ವೇಗಕ್ಕೆ 
ವಿದ್ಯುತ್ತೂ ನಾಚಿನೀರಾಗಿತ್ತು

ಸದಾ ಪುಸ್ತಕರತ  ಜ್ಞಾನದ  ನಿಜ ಪಿಪಾಸು 
ಜ್ಞಾನ ಸೌರಭ ಯಾವಾಗಲೂ ನಿಮ್ಮ ಆಸುಪಾಸು 
ನೀವಾಗಿದ್ದಿರಿ  ಬ್ರಹ್ಮ ಜಿಜ್ಞಾಸು 
ನಡೆದಿತ್ತು ಚಿಂತನ ಮಂಥನ ನೀಗುತ್ತಿದ್ದರೂ ಅಸು

ಅಕ್ಕತಂಗಿಯರ  ಮಕ್ಕಳಿಗೆ ನೆಚ್ಚಿನ ಲಂಬೂ ಮಾಮ
ನಿಮ್ಮ ಆರಾಧ್ಯ ದೈವ ಶ್ರೀ ರಾಮ
ಆ ರಾಮನು ನಿಮಗೆ ಕರುಣಿಸಲಿ ಪರಂಧಾಮ.
ಜನನ ಮರಣದ ಚಕ್ರ ಕಳಚಿ ನೀವಲ್ಲಿ ಇರಿ ಆರಾಮ

(ಜನನ: 1933,   ಮರಣ: 23-08-2022, ಶ್ರಾವಣ ಕೃಷ್ಣ ದ್ವಾದಶಿ, ಶುಭಕೃತ್ ಸಂವತ್ಸರ)

ಕೊಸರು : 
ಹಾಸ್ಯಪ್ರಿಯ  ನಮ್ಮ ದೊಡ್ಡಪ್ಪ ಲಂಬೋದರ
ಆಗಿತ್ತು ಅವರಿಗೆ ತವರಿಗೆ ಹೋಗಲು ಅವಸರ 
ಹಬ್ಬಕ್ಕೆ ಮುಂಚೆಯೇ ಮುಚ್ಚಿದರು ಈ ಲೋಕದ ಖಾತಾ 
ನಮಗೆಲ್ಲಾ ಗೌರಿ ಗಣೇಶ ಹಬ್ಬ ಗೋತಾ