Saturday, September 8, 2001

ಕ್ಯಾಲಿಫೋನಿಯಾದಲ್ಲಿ ನನ್ನ ಸ್ಥಿತಿ

 

ಅಲ್ಲಿ ಇಲ್ಲಿ ನೆಗೆಯುತಿದೆ ಮನವೆಂಬ ಮಂಗ
ಆದರೂ ಬಯಸುತಿದೆ ಸಜ್ಜನರ ಸಂಗ
ಇಲ್ಲಿ ಕಣ್ಗಳು ತರುತಲಿವೆ ಅದಕೆ ಭಂಗ
ಅದ ನಿನ್ನಲಿ ನಿಲ್ಲಿಸೋ ಹೇ ಶ್ರೀರಂಗ

ಈ ನನ್ನ ಮನಸ್ಸು ಚಂಚಲ
ಇದರಲಿ ತುಂಬಿದೆ ಹಾಲಾಹಲ
ಇದರಿಂದ ಹೊರಬರಲು ಒದ್ದಾಡುತ್ತಿದೆ ವಿಲವಿಲ
ಹೇ ಪ್ರಭು! ಕಾಪಾಡೋ ಕರುಣಾಲವಾಲ

Friday, August 10, 2001

ಹರಟೆ

ಕೇಳೇ ನನ್ನ ಜಾಣೆ 
ನೀನೆ ನನ್ನ ವೀಣೆ 

ನಾನುಡಿಸುವುದಿಲ್ಲ ಕೊಳಲು
ತೋಡಿಕೊಳ್ಳುವೆ ನನ್ನ ಅಳಲು

ನಾನೊಂದು ತೀರ ನೀನೊಂದು ತೀರ
ನಿನ್ನ (ದೂರ) ವಾಣಿಯೊಂದೇ ಹತ್ತಿರ

ಕಾದು  ಕಾದು  ಸೋತೆ, ನೀ ಬರೆಯಲಿಲ್ಲ ಈ-ಪತ್ರ 
ನೀನು ನಾಚಿಕೊಳ್ಳಲು ಏನಿದೆಯೇ ನನ್ನ ಹತ್ರ 

ನೀನು ಕೇಳಿದೆ, ನಿಮ್ಮ ಬತ್ತಳಿಕೆಯಲ್ಲಿ ಎಷ್ಟು ಕವನಗಳಿವೆಯೆಂದು 
ಪಾಪ ! ನಿನಗೆ ಗೊತ್ತಿಲ್ಲ,  ಬತ್ತಳಿಕೆ ಬರಿದಾಗಿದೆಯೆಂದು 

ಇಂಥ ಸಂದರ್ಭಗಳು ಬೇಕು, ಕವಿತೆಗಳು ಮೂಡಲು 
ಕಾತುರದಿ ಕಾದಿಹೆನು ಪ್ರೇಮಬಾಣವಾ ಹೂಡಲು 

ಇಂದಿಗೆ ಇಷ್ಟು ಸಾಕು, ಮಲಗಲು ಹೊರಟಿಹೆನು 
ಮತ್ತೆ ದೂರವಾಣಿಯಲ್ಲಿ ನಿನ್ನೊಡನೆ ಹರಟುವೇನು 

(ಸ್ಯಾನ್ಹೋಸೆ ಇಂದ ಬರೆದದ್ದು)